Sunday, November 2, 2008

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ : ಸಂಕ್ಷಿಪ್ತ ಪರಿಚಯ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪರಂಪರೆಯಲ್ಲಿ 21ನೇ ಜಗದ್ಗುರುಗಳಾದ ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಧೀಶ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಙ್ಞಾನ ಮತ್ತು ದೂರದೃಷ್ಠಿಯಿಂದ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ) (1962) ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿದೆ.

ಮಾತೃಭಾಷೆಯಾದ ಕನ್ನಡ , ವೈದಿಕ ಭಾಷೆ ಸಂಸ್ಕೃತ,ಇಂಗ್ಲೀಷ್, ಜರ್ಮನ್ ಭಾಷೆಗಳ ಅಪಾರ ಪಾಂಡಿತ್ಯ ಹೊಂದಿರುವ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಠಿ ಮತ್ತು ಶ್ರಮದ ಫಲವಾಗಿ ಬೃಹನ್ಮಠ ಮತ್ತು ಸಂಸ್ಥೆ ಹಲವಾರು ಆಡಳಿತ್ಮಾಕ ಸುಧಾರಣೆಗಳನ್ನು ಹಲವು ವಿವಿಧ ಹಂತಗಳಲ್ಲಿ ಹಮ್ಮಿಕೊಂಡಿದೆ. ಗಣಕಯಂತ್ರ (computer) ದಲ್ಲಿ ಅದ್ಭುತ ಙ್ಞಾನವನ್ನು ಹೊಂದಿರುವ ಶ್ರೀಗಳು ಪಾಣಿನಿ ಅಷ್ಟಾಧ್ಯಾಯಿ ವ್ಯಾಕರಣವನ್ನು ತಂತ್ರಾಂಶದಲ್ಲಿ ನಿರ್ಮಿಸಿ, ಅಂತರ್ಜಾಲ ಸಹಾಯದಿಂದ ವಿಶ್ವವ್ಯಾಪಿ ಸಮಸ್ತರಿಗೂ ತಲುಪುವಂತೆ ಮಾಡಿರುವುದು ಒಂದು ಕ್ರಾಂತಿಯೇ ಸರಿ. ಹಲವಾರು ಅಂತರಾಷ್ಟ್ರೀಯ ವಿಚಾರಗೋಷ್ಟಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸಿದ್ದಾರೆ.

ಪರಮಪೂಜ್ಯ ಜಗದ್ಗುರುಗಳು ಪಟ್ಟಧರಿಸಿದ ಬೆಳ್ಳಿಹಬ್ಬದ ಸವಿನೆನಪಿಗಾಗಿಯೇ ಎಂಬಂತೆ ಅನುಭವ ಮಂಟಪದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ನಿರ್ಮಾಣವಾಗುರಿವ 16 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಕಟ್ಟಡಗಳು ಪರಮಪೂಜ್ಯ ಜಗದ್ಗುರುಗಳವರ ಕ್ರೀಯಶೀಲತೆಗೆ ಸಾಕ್ಷಿ. ಸದ್ಧರ್ಮ ನ್ಯಾಯಫೀಠ, ಕೃಷಿ, ಕಾನೂನು, ಲೆಕ್ಕ ಪರಿಶೋಧನೆ ಮತ್ತು ಹಾಸ್ಟೆಲ್ ಎಂಬ ವಿವಿಧ ರೀತಿಯ ಸಮಿತಿಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ಆಗುತ್ತಿದೆ. ಶ್ರೀಗಳು ರಂಗಕಲೆಗೆ ನೀಡುತ್ತಿರುವ ಪ್ರೋತ್ಸಹ ಅಪಾರ ಹಾಗು ಅನನ್ಯ.

ಸದ್ಧರ್ಮ ನ್ಯಾಯಪೀಠ :
ಆರು ವರ್ಷಗಳ ಹಿಂದೆ ಪ್ರಾರಂಭವಾದ ಸದ್ಧರ್ಮ ನ್ಯಾಯಪೀಠ ಇಂದು ಹಿರಿಯ ತರಳಬಾಳು ಜಗದ್ಗುರುಗಳ ಸಂಸ್ಮರಣಾರ್ಥಕವಾಗಿ ಕಟ್ಟಿದ ವಿದ್ಯಾರ್ಥನಿಲಯದ ಕಟ್ಟಡದ 3ನೇ ಮಹಡಿಯಲ್ಲಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಪ್ರತಿ ಸೋಮವಾರ ನಡೆಯುತ್ತದೆ. ಈ ಸಭೆ ಬೆಳಿಗ್ಗೆ 10.00 ಯಿಂದ ರಾತ್ರಿ 9.00 ಘಂಟೆಯವರೆಗೂ ನಡೆಯುತ್ತಿರುವುದು ಸರ್ವೆ ಸಾಮಾನ್ಯ ದೃಷ್ಯವಾಗಿದೆ. ಸರ್ವ ಸಮ್ಮತವಾದ ನ್ಯಾಯ ಭಕ್ತರಿಗೆ ಯಾವದೇ ಹಣ ಮತ್ತು ಕಾಲದ ವ್ಯಯವಿಲ್ಲದೆ ದೊರೆಯುತ್ತಿರುವುದು ಇಲ್ಲಿನ ವಿಶೇಷ. ಒಂದು ಅಂದಾಜಿನ ಪ್ರಕಾರ 400 -500 ಜನದರ್ಶನ ಮತ್ತು ಆಶಿರ್ವಾದ ಪಡೆಯುವರು.
ರಂಗ ಕಲೆ:
ಹಿರಿಯ ತರಳಬಾಳು ಜಗದ್ಗುರುಗಳವರ ಕಾಲದಿಂದ ನಡೆದು ಬರುತ್ತಿರುವ ವಚನ ಸಾಹಿತ್ಯದ ಮುದ್ರಣ ಮತ್ತು ಪ್ರಚಾರ ಕಾರ್ಯ ಇಂದು ರಂಗಕಲೆಯ ಮೂಲಕ ತನ್ನ ಸಾದನೆಯಲ್ಲಿ ಹಿರಿಮೆಯನ್ನು ಸಾಧನೆಯಲ್ಲಿ ಹಿರಿಮೆಯನ್ನು ಸಾಧಿಸುತ್ತಿದೆ. ಇದು ಮಾತ್ರವಲ್ಲದೆ ಹಿರಿಯ ತರಳಬಾಳು ಜಗದ್ಗುರು ಲಿಂ ಶ್ರೀ ಶಿವಕುಮಾರ ಶಿವಾಚಾರ್ಯರು ಮಹಾಸ್ವಾಮಿಗಳವರ ಕಲಾಭಿಮಾನಕ್ಕೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.

ಸ್ವತಃ ನಾಟಕ ರಚಿಸಿ, ನಿರ್ದೇಶಿಸಿ ನಾಟಕಗಳನ್ನು ಪ್ರೋತ್ಸಹಿಸಿದ ಹಿರಿಯ ಶ್ರೀಗಳ ಪರಂಪರೆಯಲ್ಲಿ ಇಂದಿನ ಪರಮಪೂಜ್ಯ ಜಗದ್ಗುರುಗಳವರು ಮುಂದುವರೆದಿದ್ದಾರೆ ಎನ್ನುವುದು ಕಲಾರಂಗಕ್ಕೆ ಸಂದ ಗೌರವ. ಇಂದು ಸಿರಿಗೆರೆಯ ತರಳಬಾಳು ಕಲಾ ಸಂಘ ಬೇಸಿಗೆ ಕಾಲದ ರಜಾದಿನಗಳಲ್ಲಿ ರಂಗಾಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನಡೆಸುವ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದೆ.

ಸಾಣೆಹಳ್ಳಿ ಶ್ರೀ ಮಠದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳವರು ಸಹ ರಂಗಕಲೆಯನ್ನು ಪೋಷಿಸುತ್ತ ಬಂದಿರುತ್ತಾರೆ. ಈ ದೆಸೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ರಂಗಮಂದಿರವನ್ನು ನಿರ್ಮಿಸಿರುವುದು ಹಾಗು ಬಯಲು ರಂಗಮಂದಿರವನ್ನು ಈಗಾಗಲೆ ಹೊಂದಿರುವುದು ಸಾಕ್ಷಿಯಾಗಿದೆ. ಸಾಣಿಹಳ್ಳಿಯು ಶ್ರೀ ಶಿವಕುಮಾರ ಸ್ವಾಮಿ ಕಲಾ ಸಂಘ (ರಿ) ಎಂಬ ಸಂಸ್ಥೆ ಆಶ್ರಯದಲ್ಲಿ ಕಲಾ ಸೇವೆ ನಡೆಯುತ್ತದೆ. 11ನೇ ಪಾದರ್ಪಣೆ ಮಾಡಿರುವ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ಕೈಗೊಂಡಿರುವ ಶಿವ ಸಂಚಾರ ದ ಸಾಧನೆ ಒಂದು ರಚನಾತ್ಮಕ ಕಾರ್ಯವಾಗಿದೆ. ಜನರ ಮನ್ನಣೆ ಪಡೆಯುವಲ್ಲಿ ಈ ಕಲಾ ಸಂಘ ಯಶಸ್ವಿಯಾಗಿದೆ. ಪೂಜ್ಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ದೊರೆತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - 2004 ಶ್ರೀ ತರಳಬಾಳು ಕಲಾ ಸಂಘಕ್ಕೆ ಸಂದ ಗೌರವವಾಗಿದೆ.

ಬೃಹನ್ಮಠ ಮತ್ತು ವಿದಸ್ಯಾಸಂಸ್ಥೆಯ ಕಾರ್ಯಗಳು ಸುಗುಮವಾಗಿ ಹಾಗು ಹೆಚ್ಚು ಪರಿಣಾಮಕಾರಿಯಾಗಿ ನಡೆಯುವಂತೆ ಮಾಡಲು ಪರಮಾ ಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೃಷಿಸಮಿತಿ, ಕಟ್ಟಡ ಸಮಿತಿ, ಲೆಕ್ಕ ಪರಿಶೋಧನ ಸಮಿತಿ, ಹಾಸ್ಟೆಲ್ ಸಮಿತಿ, ಕಾನೂನು ಸಮಿತಿ, ಗ್ರಂಥ ಪ್ರಕಟಣ ಸಮಿತಿ ಎಂಬ ಆರು ಪ್ರಮುಖ ಸಮಿತಿಗಳನ್ನು ವಿವರವಾಗಿ ಆದೇಶಿಸಿದ್ದಾರೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿನ 77 ಪ್ರೌಢಶಾಲೆ,15 ಪದವಿ ಪೂರ್ವ ಕಾಲೇಜುಗಳು, 5 ಪದವಿ ಕಾಲೇಜುಗಳು, ಒಂದು ಬಿ.ಇಡಿ. ಕಾಲೇಜು ಮತ್ತು ಇಂಜನೀಯರಿಂಗ್ ಕಾಲೇಜುಗಳು, 4 ಸಂಸ್ಕೃತ ಪಾಠಶಾಲೆಗಳು, 9 ನರ್ಸರಿ ಶಾಲೆಗಳು, 9 ಪ್ರಾಥಮಿಕ ಶಾಲೆಗಳು, ಒಂದು ಅಂಗನವಾಡಿ ತರಬೇತಿ ಸಂಸ್ಥೆ, 2 ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು, 8 ಅನಾಥ ಮಕ್ಕಳ ಕುಟಿರ ಹಾಗು 40 ವಿದ್ಯಾರ್ಥಿ ನಿಲಯಗಳು. 175 ವಿದ್ಯಾ ಸಂಸ್ಥೆಗಳ ಆಡಳಿತ ನಿರ್ವಹಣೆಗಾಗಿ 8 ಜಿಲ್ಲೆಗಳಲ್ಲಿ ಹಂಚಿಹೋಗಿರುವ ಶಾಲಾ ಕಾಲೇಜುಗಳನ್ನು 10 ಪ್ರಾಂತ್ಯಗಳಾಗಿ ವಿಂಗಢಿಸಲಾಗಿದೆ. ಪ್ರತಿ ವಲಯದ ಮುಖ್ಯಸ್ಥರು ತಮ್ಮ ವಲಯದ ಒಳಗೆ ಬರುವ ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಪತ್ರಗಳು, ಲೆಕ್ಕ ಪತ್ರ, ಇಂಡೆಂಟ್, ಬಡ್ತಿ, ವಾರ್ಷಿಕ ಬಡ್ತಿ, ಮುಂತಾದ ಪತ್ರಗಳನ್ನು ಪ್ರತಿ ಮಂಗಳವಾರ ಕೇಂದ್ರ ಕಛೇರಿ ಇರುವ ಸಿರಿಗೆರೆಯಲ್ಲಿ ಹಾಜರಾಗುವರು.

No comments: