Sunday, November 2, 2008

ಚಿತ್ರದುರ್ಗ ಜಿಲ್ಲೆಯ ಕೈಗಾರಿಕಾ ಚಿತ್ರ

ಪೀಠಿಕೆ:
ಚಿತ್ರದುರ್ಗ ಜಿಲ್ಲೆಯು ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶವಾದರೂ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಸಾಂಸ್ಕೃತಿಕ ಬೀಡಾಗಿದೆ. ಇತಿಹಾಸ ಪ್ರಸಿದ್ಧ ಕಲ್ಲಿನ ಕೋಟೆ, ಮುರುಘರಾಜೇಂದ್ರ ಬೃಹನ್ಮಠ, ವೀರವನಿತೆ ಒನಕೆ ಓಬವ್ವನ ಕಿಂಡಿ ಇತ್ಯಾದಿಗಳನ್ನೊಳಗೊಂಡ ಮೆದಕೇರಿನಾಯಕರಾಳಿದ ಐತಿಹಾಸಿಕ ನಗರ, ಅಲ್ಲದೇ ಜಿಲ್ಲೆಯಲ್ಲಿ ಹಾಲುರಾಮೇಶ್ವರ, ರಂಗನಾಥಸ್ವಾಮಿ ದೇವಾಲಯ, ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳು ಇತ್ಯಾದಿಗಳಿವೆ.

ಕೈಗಾರಿಕಾ ಮತ್ತು ಕೃಷಿ ದೃಷ್ಟಿಯಿಂದ ನೋಡುವುದಾದರೆ ಈ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ರೇಷ್ಮೆ ಸೀರೆ ನೇಯ್ಗೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಪ್ರಕೃತಿದತ್ತ ಸುಣ್ಣದಕಲ್ಲು, ಕಬ್ಬಿಣದ ಅದಿರು, ಮ್ಯಾಂಗನೀಸ್ ಇತ್ಯಾದಿ ವಿಫುಲ ಖನಿಜ ಸಂಪತ್ತುಗಳಲ್ಲದೇ, ಕೃಷಿ ಉತ್ಪನ್ನಗಳಾದ ಮೆಕ್ಕೆಜೋಳ, ರಾಗಿ, ಈರುಳ್ಳಿ, ತೆಂಗು, ಶೇಂಗಾ ಬೆಳೆಗಳಲ್ಲದೆ ಹಣ್ಣುಹಂಪಲು, ಸೂರ್ಯಕಾಂತಿ, ಅಡಿಕೆ, ದಾಳಿಂಬೆ, ಅಂಜೂರ, ಮುಂತಾದ ತೋಟಗಾರಿಕೆ ಬೆಳೆಗಳು ಸಮೃದ್ದಿಯಾಗಿವೆ. ಈ ಸಂಪನ್ಮೂಲಗಳನ್ನಾಧರಿಸಿದ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇವು ಸ್ಥಾಪಿಸಲ್ಪಟ್ಟಿವೆ. ಜಿಲ್ಲೆಯಲ್ಲಿ ಕುಶಲಕರ್ಮಿಗಳು ಮಹಿಳಾ ಸ್ವಸಹಾಯ ಸಂಘದವರು ಗುಡಿ ಕೈಗಾರಿಕೆ ಮತ್ತು ಗುಂಪು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಉತ್ಪಾದನೆಗೆಂದು ಗಾಳಿಯಂತ್ರಗಳು (wind mills)ಸ್ಥಾಪಿತವಾಗಿವೆ. ಆದಾಗ್ಯೂ ಕೈಗಾರಿಕಾಭಿವೃದ್ಧಿ ಮಂದಪ್ರಗತಿಯಲ್ಲಿದೆಯೆಂದು ಹೇಳಲೇಬೇಕಾಗಿದೆ.

ಜಿಲ್ಲೆಯ ಭೌಗೋಳಿಕ ಲಕ್ಷಣಗಳು
1998ರಲ್ಲಿ ಹೊಸ ಜಿಲ್ಲೆಗಳ ಉದಯದ ನಂತರ ಹೊಸ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಎಂದು 6 ತಾಲ್ಲೂಕುಗಳನ್ನು ಹೊಂದಿದೆ. ಜಿಲ್ಲೆಯು ರಾಜ್ಯದ ಮಧ್ಯಭಾಗದಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಒಟ್ಟು ವಿಸ್ತೀರ್ಣ 7,70,700 ಹೆಕ್ಟೇರ್ ಗಳಿದ್ದು, ಬಹುಭಾಗ ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಮತ್ತು ಕಪ್ಪು ಮಣ್ಣಿನಿಂದ ಕೂಡಿದೆ. 4,08,168 ಹೆಕ್ಟೇರ್ ಗಳ ಸಾಗುವಳಿ, 77,255 ಹೆಕ್ಟೇರುಗಳ ನೀರಾವರಿ ಕ್ಷೇತ್ರ ಹಾಗೂ 73,719 ಹೆಕ್ಟೇರುಗಳಲ್ಲಿ ಅರಣ್ಯ ಭೂಮಿಯಿದೆ.
ಜಿಲ್ಲೆಯ ಬಹುಭಾಗ ಬರಡಾಗಿದ್ದು ಹವಾಮಾನವು 35 ಡಿ.ಸೆ.ನಿಂದ 42 ಡಿ.ಸೆ.ನವರೆಗೆ ಉಷ್ಣಾಂಶ ಹೊಂದಿರುತ್ತದೆ. ಜಿಲ್ಲೆಯ ವಾರ್ಷಿಕ ಮಳೆ ಪ್ರಮಾಣವು 450 ಮಿ.ಮೀ. ನಿಂದ 468 ಮಿ.ಮೀ ಜಿಲ್ಲೆಯಲ್ಲಿ ಸರ್ವ ಋತುಮಾನದ ಏಕೈಕ ನದಿ ವೇದಾವತಿ ಹರಿಯುತ್ತಿದ್ದು, ನೀರಾವರಿಯಿಂದ ವಂಚಿತರಾಗಿ, ರೈತರು ಕೇವಲ ಮಳೆ ನೀರನ್ನು ಆಶ್ರಯಿಸಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಕೃಷಿಕರು ಹಾಗೂ ತೋಟಗಾರರು ನಿರತರಾಗಿದ್ದು, ಇದರಿಂದ ಎಣ್ಣೆ ಮಿಲ್ ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ತೆಂಗಿನ ಬೆಳೆಯನ್ನು ಅವಲಂಭಿಸಿ ತೆಂಗಿನ ನಾರಿನ ಹುರಿ, ಹಗ್ಗ ಉತ್ಪಾದಿಸುವ ಕೈಗಾರಿಕೆಗಳಿವೆ. ವಿಫುಲ ನೈಸರ್ಗಿಕ ಖನಿಜಗಳಿಂದ ಗಣಿಗಾರಿಕೆ ಚಟುವಟಿಕೆ ಕೇಂದ್ರೀಕೃತವಾಗಿದೆ. ಸುಣ್ಣದ ಕಲ್ಲುಗಳನ್ನು ಅವಲಂಭಿಸಿ ಸಿಮೆಂಟ್ ಕಾರ್ಖಾನೆಗಳಿವೆ.

ಸಂಪನ್ಮೂಲಗಳು:
ಜಿಲ್ಲೆಯ ಜನಸಂಖ್ಯೆಯ ಬಹುಬಾಗ ಕೃಷಿಯನ್ನು ಅವಲಂಬಿಸಿದೆ. ಭೂಮಿಯು ಫಲವತ್ತಾದ್ದರಿಂದ ಬೃಹತ್ ನೀರಾವರಿ ಯೋಜನೆ ಜಿಲ್ಲೆಯಲ್ಲಿ ಲಭ್ಯವಿಲ್ಲದಾಗ್ಯೂ ಮಳೆ ನೀರನ್ನು ಅವಲಂಬಿಸಿ ಉತ್ತಮ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸದರಿ ಪ್ರಮುಖ ಬೆಳೆಗಳ ಸರಾಸರಿ ವಾರ್ಷಿಕ ಇಳುವರಿ ಕೆಳಗಿನಂತಿದೆ.
ಬೆಳೆಗಳು ಇಳುವರಿ ( ಮೆ.ಟನ್ ಗಳಲ್ಲಿ )
ಮೆಕ್ಕೆಜೋಳ 115550
ಜೋಳ 38700
ಈರುಳ್ಳಿ 435125
ತೊಗರಿ 18250
ಕಡಲೆ 14150
ರಾಗಿ 61750
ಸೂರ್ಯಕಾಂತಿ 28350
ಶೇಂಗಾ 195000
ಅಲಸಂದಿ 15250

ತೋಟಗಾರಿಕೆ ಬೆಳೆಗಳನ್ನು ಸಮೃದ್ದಿಯಾಗಿ ಬೆಳೆಯಲಾಗುತ್ತಿದ್ದು ಅವುಗಳ ಸರಾಸರಿ ವಾರ್ಷಿಕ ಇಳುವರಿ ಈ ಕೆಳಗಿನಂತಿದೆ.
ತೆಂಗು 6095 ಲಕ್ಷ (ಸಂಖ್ಯೆ)
ಮಾವು 13516 ಮೆ. ಟನ್
ಅಂಜೂರ 8600 ಮೆ. ಟನ್
ಅಡಿಕೆ 46615 ಮೆ. ಟನ್
ದಾಳಿಂಬೆ 9825 ಮೆ. ಟನ್
ಪಪ್ಪಾಯಿ 25700 ಮೆ. ಟನ್

ಅಂತೆಯೇ ಹಿರಿಯೂರು ತಾಲ್ಲೂಕು ಹುಚ್ಚವ್ವನಹಳ್ಳಿಯಲ್ಲಿ ಆಹಾರ ಕೃಷಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗುತ್ತಿದೆ.
ಜಿಲ್ಲೆಯಲ್ಲಿ ಹಸು, ಎಮ್ಮೆ, ಕುರಿ, ಆಡು, ಕೋಳಿ, ಇತ್ಯಾದಿ ಜಾನುವಾರು ಮತ್ತು ಪಕ್ಷಿಗಳ ಸಂಖ್ಯೆ ಸಮೃದ್ದಿಯಾಗಿದೆ. ಇದರಿಂದ ಉಣ್ಣೆ ನೇಯ್ಗೆ ಕುಶಲಕರ್ಮಿಗಳು ಕಂಬಳಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಹಾಲು ಒಕ್ಕೂಟದಡಿಯಲ್ಲಿ ಜಿಲ್ಲೆಯಲ್ಲಿ ದಿನಂಪ್ರತಿ 3 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಶಿವಮೊಗ್ಗ ಹಾಲು ಒಕ್ಕೂಟದಿಂದ ಮಾರಾಟ ವ್ಯವಸ್ಥೆಯಾಗುತ್ತಿದೆ. ಬಹುಸಂಖ್ಯೆಯಲ್ಲಿ ಕೋಳಿ ಉದ್ಯಮ ಮತ್ತು ಕೋಳಿ ಆಹಾರ ತಯಾರಿಕಾ ಘಟಕಗಳಿವೆ.

ಜಿಲ್ಲೆಯಲ್ಲಿ 4066 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು ವಾರ್ಷಿಕ ಬೆಳೆಯಲಾಗುತ್ತಿದ್ದು ವಾರ್ಷಿಕ 6000 ಮೆ. ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ರೇಷ್ಮೆ ನೂಲು ಬಿಚ್ಚುವ ಘಟಕಗಳು, ರೇಷ್ಮೆ ಸೀರೆ ನೇಯ್ಗೆ ಘಟಕಗಳು ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿವೆ.

ಜಿಲ್ಲೆಯಲ್ಲಿ ಹೇರಳವಾದ ಮಾನವ ಸಂಪನ್ಮೂಲ ಲಭ್ಯವಿದೆ. ಇಂಜಿನಿಯರಿಂಗ್, ದಂತ ಮತ್ತು ವೈದ್ಯಕೀಯ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿ ಶಿಕ್ಷಣ ಸಂಸ್ಥೆ, ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಸಂಸ್ಥೆಗಳು ಇತ್ಯಾದಿಗಳಿಂದ ಉತ್ತಮ ಶಿಕ್ಷಣ ಪಡೆದ ಪದವೀಧರರು, ತರಬೇತಿ ಪಡೆದವರು ಹೆಚ್ಚಾಗಿ ಹೊರಬರುತ್ತಿದ್ದಾರೆ. ಜೊತೆಗೆ ರುಡ್ ಸೆಟ್ (RUDSET) ಕುಶಲಕರ್ಮಿ ತರಬೇತಿ ಕೇಂದ್ರ, ನಿರ್ಮಿತಿ ಕೇಂದ್ರ ಇತ್ಯಾದಿಗಳಿಂದ ನುರಿತ ಕೆಲಸಗಾರರು ಲಭ್ಯರಿದ್ದಾರೆ.

ಮೂಲ ಸೌಕರ್ಯಗಳು:
ಜಿಲ್ಲೆಯಲ್ಲಿ 887 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 486 ಕಿ.ಮೀ. ರಾಜ್ಯ ಹೆದ್ದಾರಿ ಇದೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಂ 4 ಹಿರಿಯೂರು - ಚಿತ್ರದುರ್ಗ ಮಾರ್ಗವಾಗಿ ಮತ್ತು ರಾ.ಹೆ. 13 ಚಿತ್ರದುರ್ಗ- ಹೊಳಲ್ಕೆರೆ ಮಾರ್ಗವಾಗಿ ಒಟ್ಟು 166 ಕಿ.ಮೀ. ಉದ್ದವಿದೆ. ಚಿತ್ರದುರ್ಗದಿಂದ ಚಿಕ್ಕಜಾಜೂರುವರೆಗೆ ಮುಖ್ಯ ರೈಲುಮಾರ್ಗಕ್ಕೆ ಸಂಪರ್ಕದ ಮತ್ತು ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗವಾಗಿ ರಾಯದುರ್ಗಕ್ಕೆ ಸೇರುವ ಒಟ್ಟು 154 ಕಿ.ಮೀ. ಉದ್ದದ ಬ್ರಾಡ್ ಗೇಜ್ ರೈಲುಮಾರ್ಗವಿದೆ.

ಜಿಲ್ಲೆಯಲ್ಲಿ ಒಟ್ಟು 306 ಅಂಚೆಕಚೇರಿಗಳು, 45 ತಂತಿ ಕಚೇರಿಗಳು, 84 ದೂರವಾಣಿ ವಿನಿಮಯ ಕೇಂದ್ರಗಳಿದ್ದು, ಒಟ್ಟು 41813 ದೂರವಾಣಿಗಳಿವೆ. ಜಿಲ್ಲೆಯ 1245 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದ್ದು, ಬೆಸ್ಕಾಂ ಸಂಸ್ಥೆಯ ಎರಡು ವಿಭಾಗಗಳು ಚಿತ್ರದುರ್ಗ, ಹಿರಿಯೂರಿನಲ್ಲಿದ್ದು 220 ಮೆಗಾವ್ಯಾಟ್ ಸಾಮರ್ಥ್ಯ ವಿದ್ಯುತ್ (ಶರಾವತಿಯಿಂದ ಬರುವುದನ್ನು ಒಳತೆಗೆದುಕೊಳ್ಳುವ) ರಿಸೀವಿಂಗ್ ಸ್ಟೇಷನ್ ಹಿರಿಯೂರಿನಲ್ಲಿದೆ. ಪ್ರತಿ ತಾಲ್ಲೂಕಿನಲ್ಲಿ ಉಪ ಪ್ರಸರಣಾ ಕೇಂದ್ರಗಳಂತೆ ಒಟ್ಟು 37 ಕೇಂದ್ರಗಳಿವೆ. ಜಿಲ್ಲೆಯಲ್ಲಿ 200 ಗಾಳಿಯಂತ್ರಗಳಿಂದ 45 ಮೆ.ವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಜಿಲ್ಲೆಯಲ್ಲಿ 66 ವಾಣಿಜ್ಯ ಬ್ಯಾಂಕುಗಳ ಶಾಖೆಗಳಿದ್ದು, 63 ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಿವೆ. 8 ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕ್ ಶಾಖೆಗಳು ಮತ್ತು 6 ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಶಾಖೆಗಳಿವೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಒಂದು ಶಾಖಾ ಕಚೇರಿ ಚಿತ್ರದುರ್ಗದಲ್ಲಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಕೈಗಾರಿಕಾಭಿವೃದ್ಧಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳ (ನೀರು, ರಸ್ತೆ, ವಿದ್ಯುತ್) ಒಟ್ಟು 3 ವಸಾಹತುಗಳನ್ನು ನಿರ್ಮಿಸಿದ್ದು, ಚಿತ್ರದುರ್ಗ, ಹಿರಿಯೂರು ಮತ್ತು ಹೊಸದುರ್ಗದಲ್ಲಿ ಸ್ಥಾಪಿತವಾಗಿದೆ. ಒಟ್ಟು 60 ಮಳಿಗೆಗಳನ್ನು ಮತ್ತು 153 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಬಹುಭಾಗ ಹಂಚಿಕೆಯಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಚಿತ್ರದುರ್ಗ ಕೋಟೆಯಲ್ಲಿ 86 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, 87 ವಿವಿಧ ವಿಸ್ತೀರ್ಣಗಳ ನಿವೇಶನಗಳನ್ನು ನಿರ್ಮಿಸಿ ಬೇಡಿಕೆಯಂತೆ ಮಂಡಳಿಯು ಹೊಳಲ್ಕೆರೆ ರಸ್ತೆಯಲ್ಲಿ 50 ಎಕರೆ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳಿಸಲು ಕಾರ್ಯೋನ್ಮುಖವಾಗಿದೆ.

ಹಾಲಿ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು:
1. ಕುಶಲಕರ್ಮಿಗಳು:
ಜಿಲ್ಲೆಯಲ್ಲಿ 24 ವಿವಿಧ ಕಸುಬುಗಳಲ್ಲಿ 16600 ಗ್ರಾಮೀಣ ಕುಶಲಕರ್ಮಿಗಳಿದ್ದಾರೆ. ಹೆಚ್ಚಿನ ಸಂಖ್ಯೆಯ ಕಂಬಳಿ ನೇಕಾರರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕಿನಲ್ಲಿದ್ದಾರೆ. ರೇಷ್ಮೆ ಸೀರೆ ನೇಕಾರರು ಮೊಳಕಾಲ್ಮೂರು, ಚಳ್ಳಕೆರೆಯಲ್ಲಿದ್ದಾರೆ. ಇನ್ನುಳಿದಂತೆ ಶಿಲ್ಪ ಕೆತ್ತನೆಗಾರರು ಹೊಳಲ್ಕೆರೆ ತಾಲ್ಲೂಕಿನ ನಾರಾಯಣಗೊಂಡನಹಳ್ಳಿಯಲ್ಲಿ, ಕಂಚಿನ ವಿಗ್ರಹ, ಹಿತ್ತಾಳೆ ಪ್ರಭಾವಳಿ ಕರಕುಶಲಕರ್ಮಿಗಳು ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮತ್ತು ಇನ್ನುಳಿದಂತೆ ಬಡಗಿ, ಕಮ್ಮಾರರು, ಚಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಹತ್ತಿ ನೇಯ್ಗೆ ನೇಕಾರರು, ತೆಂಗಿನ ನಾರಿನ ಕಸುಬುದಾರರು ಎಲ್ಲಾ ತಾಲ್ಲೂಕುಗಳಲ್ಲಿ ಇದ್ದಾರೆ.

2. ಇಲ್ಲಿಯವರೆಗೂ ಸ್ಥಾಪಿತವಾದ ಕೈಗಾರಿಕೆಗಳ ವರ್ಗೀಕರಣ:
ಆಹಾರ ಆಧಾರಿತ ಕೈಗಾರಿಕೆಗಳು, ಜವಳಿ ಆಧಾರಿತ ಕೈಗಾರಿಕೆಗಳು, ಮರ ಆಧಾರಿತ ಕೈಗಾರಿಕೆಗಳು, ಚರ್ಮ ಆಧಾರಿತ ಕೈಗಾರಿಕೆಗಳು, ಪ್ರಿಂಟಿಂಗ್ ಮತ್ತು ಸ್ಟೇಷನರಿ ಆಧಾರಿತ ಕೈಗಾರಿಕೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಆಧಾರಿತ ಕೈಗಾರಿಕೆಗಳು, ಜನರಲ್ ಇಂಜಿನಿಯರಿಂಗ್ ಆಧಾರಿತ ಕೈಗಾರಿಕೆಗಳು, ಕೆಮಿಕಲ್ಸ್ ಆಧಾರಿತ ಕೈಗಾರಿಕೆಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಆಧಾರಿತ ಕೈಗಾರಿಕೆಗಳು, ಆಟೋಮೊಬೈಲ್ಸ್ ಆಧಾರಿತ ಕೈಗಾರಿಕೆಗಳು, ಫೆರಸ್ ಮತ್ತು ನಾನ್ ಫೆರಸ್ ಕೈಗಾರಿಕೆಗಳು, ಬೇಸಿಕ್ ಮೆಟಲ್ ಆಧಾರಿತ ಕೈಗಾರಿಕೆಗಳು, ಗ್ಲಾಸ್ ಮತ್ತು ಸೆರಾಮಿಕ್ಸ್ ಆಧಾರಿತ ಕೈಗಾರಿಕೆಗಳು, ಜಾಬ್ ವರ್ಕ್ ಆಧಾರಿತ ಕೈಗಾರಿಕೆಗಳು, ಮಿಸ್ ಲೇನಿಯಸ್ ಆಧಾರಿತ ಕೈಗಾರಿಕೆಗಳು, ಇತರೆ ಕೈಗಾರಿಕೆಗಳು.

ಜಿಲ್ಲೆಯ ಸ್ವಾಟ್ ಅನಾಲಿಸಿಸ್:
ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆ ಚಟುವಟಿಕೆ ಪ್ರಾರಂಭಿಸುವ ಮುನ್ನ ಜಿಲ್ಲೆಯ ಪ್ರಬಲ ಅಂಶಗಳು, ದುರ್ಬಲ ಅಂಶಗಳು, ಅವಕಾಶಗಳು ಹಾಗೂ ಅಪಾಯ ಅಂಶಗಳ ವಿಶ್ಲೇಷಣೆ ಅತ್ಯಾವಶ್ಯಕವಾಗಿರುತ್ತದೆ.
ಪ್ರಬಲತೆಗಳು (strength):
1. ರಾಷ್ಟ್ರೀಯ ಹೆದ್ದಾರಿ 4 ಮತ್ತು 13 ರಿಂದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ
2. ಮುಖ್ಯವಾದ ಪ್ರವಾಸಿ ತಾಣ
3. ವಿಫುಲವಾದ ಕೃಷಿ ತೋಟಗಾರಿಕೆ ಬೆಳೆ ಉತ್ಪನ್ನ
4. ಎಲ್ಲಾ ಋತುಮಾನಗಳಲ್ಲಿ ಗಾಳಿವೇಗ ಸಮನಾದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಗಾಳಿಯಂತ್ರ (windmill) ಸ್ಥಾಪನೆಗೆ ಅವಕಾಶ.
5. ಜಿಲ್ಲೆಯ ಬಹಳ ಸಂಖ್ಯೆಯ ವಿದ್ಯಾಸಂಸ್ಥೆಗಳಾದ ಇಂಜಿನಿಯರಿಂಗ್, ಪದವಿ ಕಾಲೇಜು, ಡೆಂಟಲ್ ಕಾಲೇಜು, ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಕೇಂದ್ರ, ವೃತ್ತಿಪರ ಶಿಕ್ಷಣ ಸಂಸ್ಥೆ, ನೈಪುಣ್ಯ ಹೆಚ್ಚಿಸುವ ರುಡ್ ಸೆಟ್, ಸ್ಟೆಪ್,

1 comment:

Anonymous said...

ಉತ್ತಮ ಪ್ರಯತ್ನ...