Wednesday, January 7, 2009

ಚಿತ್ತಾರದುರ್ಗ ಪತ್ರಿಕಾ ವರದಿಗಳು - 2






ಚಿತ್ತಾರದುರ್ಗ ಪತ್ರಿಕಾ ವರದಿ - 1

ಸಾಹಿತ್ಯ ಜಾತ್ರೆ

ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದ್ದು, ಬರದ ನಾಡಲ್ಲಿ ಸಾಹಿತ್ಯ ಜಾತ್ರೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾಹಿತ್ಯಪೂರಕ ಚಟುವಟಿಕೆಗಳು ತುಸು ಬಿರುಸಾಗಿವೆ. ಇದೆಲ್ಲದರ ನಡುವೆ ಸಮ್ಮೇಳನದ ದೇಣಿಗೆ ಅಭಿಮಾನದ ಸ್ವರೂಪ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ.
ಒಂದೆರಡು ತಿಂಗಳು ಹಿಂದಕ್ಕೆ ಹೋಗಿ ಆಲೋಚಿಸಿದರೆ ಅಂದಿನ ಪರಿಸ್ಥಿತಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸಗಳು ಗೋಚರಿಸುತ್ತದೆ. ಸಮ್ಮೇಳನದ ದಿನಾಂಕ ಘೋಷಣೆಯಾದ ಮೇಲೆ ಮೂಲಸೌಕರ್ಯಗಳಿಲ್ಲ, ಮಲಗೋಕೆ ಜಾಗಗಳಿಲ್ಲ, ಓಡಾಡಲು ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಇದೆಲ್ಲ ಹೊರತಾಗಿ ದೇಣಿಗೆ ಯಾರು ಕೊಡ್ತಾರೆ? ಎಂಬಂತೆ ಇತ್ಯಾದಿ ಅಪಸ್ವರದ ರಾಗಗಳು ಕೇಳಿಬಂದವು. ಸುಮ್ಮನೇ ಕುಳಿತು ಆಲೋಚಿಸುವವರಿಗೆ ಇದೆಲ್ಲ ನಿಜವೆಂಬ ಭಾವನೆಗಳು ಮೂಡಿರಬಹುದು. ಆದರೆ ಸಾಹಿತ್ಯ ಜಾತ್ರೆಗೆ ಇಂತದ್ದೊಂದು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಯಾರೂ ಊಹಿಸದಷ್ಟು ರೀತಿಯಲ್ಲಿ ಚಟುವಟಿಕೆಗಳು ನೆಡಯುತ್ತಿರುವುದು ಅಚ್ಚರಿ ತರಿಸಿದೆ.
ಸರ್ಕಾರಿ ನೌಕರರು ಉದ್ಯಮಿಗಳು, ವರ್ತಕರು, ಸಂಘಸಂಸ್ಥೆಗಳು, ಉದಾರವಾಗಿ ದೇಣಿಗೆ ನೀಡುವ ತೀರ್ಮಾನ ಕೈಗೊಂಡಿರುವುದು ಬಯಲು ಸೀಮೆ ಎಂಬ 'ಕಹಿ' ಬರಹ ತುಸು ಮರೆಮಾಚಿದಂತಾಗಿದೆ. ಕೇವಲ ಹದಿನೈದು ದಿನದ ಅಂತರದಲ್ಲಿ ಅರ್ಧ ಕೋಟಿಯಷ್ಟು ಹಣ ದೇಣಿಗೆ ರೂಪದಲ್ಲಿ ಸಮ್ಮೇಳನ ಸಮಿತಿಗೆ ಜಮಾ ಆಗಿರುವುದೇ ಇದಕ್ಕೆ ಸಾಕ್ಷಿ. ಇದಲ್ಲದೇ ಆಹಾರ ಪದಾರ್ಥಗಳು ಕೂಡ ಸಂಗ್ರಹವಾಗುತ್ತಿದೆ

ಚಿತ್ತಾರದುರ್ಗ ಸಂಭ್ರಮದ ಫೋಟೋ ಗ್ಯಾಲರಿ

ಕುಮಾರಿ ನಮ್ರತ ಪ್ರಾರ್ಥಿಸಿದರು

ಚಿತ್ತಾರದುರ್ಗ ನಿರ್ಮಾತೃ "ಆರ್.ರಾಘವೇಂದ್ರ" ಸ್ವಾಗತಿಸಿದರು

ಡಾ. ಸಿ.ಶಿವಲಿಂಗಪ್ಪ ರವರು ಪ್ರಾಸ್ತಾವಿಕ ನುಡಿ ಭಾಷಣ ಮಾಡಿದರು.

ಚಳ್ಳಕೆರೆಯ ಜನಪ್ರಿಯ ಶಾಸಕರಾದ ತಿಪ್ಪೇಸ್ವಾಮಿ ರವರು ಮುಖ್ಯಅತಿಥಿಗಳ ಭಾಷಣ ಮಾಡಿದರು

ತಹಶೀಲ್ದಾರ್ ಹೆಚ್.ಜ್ಞಾನೇಶ್ ಭಾಷಣ ಮಾಡಿದರು


ಚಿತ್ತಾರದುರ್ಗದ ನಿರ್ಮಾತೃ ಭರತ್ ಕುಮಾರ್ ವಂದನೆ ಸಲ್ಲಿಸಿದರು.


ಆರ್.ರಾಘವೇಂದ್ರ ರವರು ಶಾಸಕರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ರವರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಚಿತ್ತಾರದುರ್ಗದ ನಿರ್ಮಾತೃಗಳು: ಆರ್.ರಾಘವೇಂದ್ರ - ಬಿ.ವಿ.ಭರತ್ ಕುಮಾರ್