Friday, May 29, 2009

ಚುನಾವಣಾ ಫಲಿತಾಂಶ ಪ್ರಕಟಣೆ: ರಾಜ್ಯದಲ್ಲಿ ಚಿತ್ರದುರ್ಗ ಪ್ರಥಮ

2009ನೇ ಸಾಲಿನ ಲೋಕಸಭಾ ಚುನಾವಣೆ ಫಲಿತಾಂಶ ನಿರೀಕ್ಷತ ಮಟ್ಟದಲ್ಲಿ ಹೊರಬಿದ್ದಿದ್ದು ಆಶ್ಚರ್ಯವಲ್ಲ. ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಹಿರಿಯೂರು, ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳನ್ನು ಒಳಪಟ್ಟಿದ್ದು, ಅಲ್ಲಿಯ ಮತದಾರರು ನಿರ್ಧರಿಸಿದ ಫಲಿತಾಂಶವನ್ನು ಹೊರಗೆಡವಲು ಚಿತ್ರದುರ್ಗವು ಸನ್ನದ್ಧವಾಗಿದೆ. ಚಿತ್ರದುರ್ಗ ಜಿಲ್ಲಾ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ (NIC) ಶ್ರೀ ಹೆಚ್.ಎನ್. ರವಿಶಂಕರ್, D.I.O.,ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ, D.I.A., ರವರ ನೇತೃತ್ವದ ತಾಂತ್ರಿಕ ತಂಡವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಜಯ ಸಾಧಿಸಿದೆ. ಇದಕ್ಕೆ ಈಗಾಗಲೇ 3-4ಬಾರಿ ತರಬೇತಿ ನೀಡಿರುವುದು ಸಹ ಕಾರಣವಾಗಿದ್ದರೆ, ತಂಡದಲ್ಲಿದ್ದ ದೀಪಕ್, ಮಂಜುನಾಥ ಪಾಟೀಲ್, ಪಾಷ, ಶ್ರೀಶೈಲ ಪ್ರಕಾಶ್ (Network Eng.), ಉಮೇಶ್, ಆರ್.ರಾಘವೇಂದ್ರ(ಚಿತ್ತಾರದುರ್ಗ), ಮಹೇಶ್, ಗೋವಿಂದರಾಜ್, ವಸಂತಕುಮಾರ್, ಅರ್ಜುನ್, ವರುಣ್, ಮಧುಸೂಧನ್, ಆದರ್ಶ, ಸುನೀತ, ಶ್ವೇತಾ, ಉಮಲತಾ, ಪದ್ಮಾಕ್ಷಿ, ಶಭಾನಾ, ಸಾಧಿಕ್, ಮಧು, ನಾಗರಾಜ್, ರಾಜುಗೌಡ, ಅರವಿಂದ, ಗೋವಿಂದನಾಯ್ಕ್, ಶಂಭುಲಿಂಗಪಾಟೀಲ ಮುಂತಾದವರಿಗೆ ಉತ್ಸಾಹ ತುಂಬುವುದರಲ್ಲಿ ನಿರಂತರ ಕಾರ್ಯೋನ್ಮುಖರಾಗಿದ್ದ ಶ್ರೀ ಹೆಚ್.ಎನ್.ರವಿಶಂಕರ್ ಹಾಗೂ ಶ್ರೀ ಕೆ.ರಾಮಕೃಷ್ಣಶಾಸ್ತ್ರಿ ಯವರು ಕಾರಣ. ಆದರೆ ಎಲ್ಲರಿಗಿಂತ ತಡವಾಗಿ ಮತ ಎಣಿಕೆ ಕಾರ್ಯ ಮುಗಿಯಬೇಕಾಗಿದ್ದ ಪಾವಗಡ ಮತ್ತು ಚಳ್ಳಕೆರೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆಶ್ಚರ್ಯಕರ ರೀತಿಯಲ್ಲಿ ಮೊದಲು ಮುಗಿದಿತ್ತು.

ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದಂತೆ ಹಾಗೂ ಚಳ್ಳಕೆರೆ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ವಿಳಂಬವಾಗುವುದೆಂದು ಜಿಲ್ಲಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಆದರೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಹಾಗೂ ದೇಶದಲ್ಲಿಯೇ 3ನೇ ಸ್ಥಾನವನ್ನು ಪಡೆದು ಚುನಾವಣಾ ಫಲಿತಾಂಶವನ್ನು ಹೊರಹಾಕುವಲ್ಲಿ NICಯ ಅಧಿಕಾರಿಗಳ ಶ್ರಮ ಹಾಗೂ ಕಾರ್ಯದಕ್ಷತೆ ಕಾರಣ. ಆ ದಿನ ಬೆಳಿಗ್ಗೆ 10.55ರ ಸುಮಾರಿಗೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಕಾರ್ಯ ಮುಕ್ತಾಯಗೊಂಡಿದ್ದು, ಸುಮಾರು 11.10ಕ್ಕೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಚುನಾವಣಾ ಫಲಿತಾಂಶವನ್ನು ಪ್ರಕಟಣೆ ಮಾಡಿದರು.

ರಾಜ್ಯದಲ್ಲಿಯೇ ಪ್ರಥಮವಾಗಿ ಹಾಗೂ ದೇಶದಲ್ಲಿಯೇ ತೃತಿಯವಾಗಿ ಫಲಿತಾಂಶ ಪ್ರಕಟ ಮಾಡಿದ್ದರಿಂದ NICಯ ಸಿಬ್ಬಂದಿಗೆ ಹಾಗೂ ಚುನಾವಣಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ನೂತನ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಭಿನಂದಿಸಿದರು.

2 comments:

Unknown said...

thank you raghu...... Its happen because of your effort, first i like to thank all the operators, they done awesome job......
but you done a mistake in mail that you left some persons name VANI, bhoomi RAJU GOWDA, SRISHYALA PRAKASH

Unknown said...

thanks to you raghu.............
from our NIC,Pasha and Umalatha madam telling you thanks
and i personaly thanks all the operators thank you all