Friday, May 29, 2009

ಚಿತ್ರದುರ್ಗ: ರಾಜ್ಯದ ಮೊದಲ ಖಾತೆ ತೆರೆದ ಬಿ.ಜೆ.ಪಿ.

ಐತಿಹಾಸಿಕ ಜಿಲ್ಲೆಯಾದ ಚಿತ್ರದುರ್ಗವು ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುವುದರಲ್ಲಿ ಕೂಡ ಇತಿಹಾಸ ಸೃಷ್ಟಿಸಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ 11ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಜನಾರ್ಧನಸ್ವಾಮಿ(ಬಿ.ಜೆ.ಪಿ), ಡಾ.ಬಿ.ತಿಪ್ಪೇಸ್ವಾಮಿ (ಕಾಂಗ್ರೆಸ್), ಎಂ.ಜಯಣ್ಣ (ಬಿ.ಎಸ್.ಪಿ), ಶಶಿಶೇಖರನಾಯ್ಕ್ (ಆರ್.ಜೆ.ಡಿ), ಎಂ.ಕುಂಬಯ್ಯ, ಗಣೇಶ್, ಕೆ.ಎಚ್.ದುರ್ಗಸಿಂಹ, ರಾಮಚಂದ್ರ, ಬಿ.ಸುಜಾತಾ ಮತ್ತು ಹನುಮಂತಪ್ಪ ತೇಗನೂರು ರವರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದರು.

ಮತಬಾಂಧವರು ಈ ಬಾರಿ ತಮ್ಮ ನಿಲುವನ್ನು ಬದಲಿಸಿಕೊಂಡಂತೆ ಕಂಡಿದ್ದು, ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿದ ಶ್ರೀ ಜನಾರ್ಧನಸ್ವಾಮಿ, ರವರನ್ನು 1,35,656 ಮತಗಳ ಅಂತರದಿಂದ ಜಯಭೇರಿ ಸಾಧಿಸುವಂತೆ ಅದೃಷ್ಟವನ್ನು ಕರುಣಿಸಿದ್ದಾರೆ. ಬಿ.ಜೆ.ಪಿ.ಯ ಜನಾರ್ಧನಸ್ವಾಮಿರವರಿಗೆ 3,70,962 ಮತಗಳು ಹಾಗೂ ಕಾಂಗ್ರೆಸ್ ನ ಡಾ.ಬಿ.ತಿಪ್ಪೇಸ್ವಾಮಿ ರವರಿಗೆ 2,35,306 ಮತಗಳನ್ನು ಹಾಕುವುದರ ಮೂಲಕ ಮತದಾರ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾನೆ.

ಫಲಿತಾಂಶ ಪ್ರಕಟಣೆ ನಂತರ ಸುದ್ದಿಗಾರರೊಂದಿಗೆ ಮಾಡುತ್ತಾ, ಬಿ.ಜೆ.ಪಿ. ಪಕ್ಷದ ಜನಪ್ರಿಯತೆ, ಸಾಧನೆಗಳು, ಕಾರ್ಯಕರ್ತರ ಬೆಂಬಲದಿಂದಾಗಿ ವಿಜಯಮಾಲೆ ಧರಿಸಿರುವುದಾಗಿ ಹೇಳಿದರು. ಅಲ್ಲದೇ ಚಿತ್ರದುರ್ಗ ಕ್ಷೇತ್ರವು ಹಿಂದುಳಿದ ಕ್ಷೇತ್ರವಾಗಿದ್ದು, ರೈಲ್ವೆ, ಪ್ರವಾಸೋದ್ಯಮ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಜನೆ, ಇತ್ಯಾದಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದಾಗಿ ಹೇಳಿದರು.

No comments: